Posts

Showing posts from October, 2017
Image
ನನ್ನೂರ ಬೆಳಗು....... ಸುಗ್ಗಿ ಸಮಯ ಕಣದ ಬಲ ಬದಿಗೆ ರಾಗಿಯ ರಾಶಿ, ಎಡ ಬದಿಯಲ್ಲೊಂದು ಕಡೆ ತೊಗರಿ, ಮತ್ತೊಂದು ಕಡೆ ಅವರೆ. ಆಳೆತ್ತರಕ್ಕೆ ಪೇರಿಸಿಟ್ಟ ಮೊರಗಳು. ಪಕ್ಕದಲ್ಲೆ ಸದಾ ಹರಿವ ಕಾಲುವೆ. ಕಣ್ಣು ಹಾಯಿದಷ್ಟು ದೂರಕ್ಕೂ ಕಾಣುವ ಹಸಿರು.  ತೋಟದ ತುಂಬ ತೆಂಗು, ಹಲಸು, ಮಾವು, ಪೇರಲೆ, ಪಪ್ಪಾಯ, ಕಾಡು ಜಿರಂಗಿ ( ರಾಮಫಲ) ಸಪೋಟ, ದಾಳಿಂಬೆ, ನೆಲ್ಲಿ ಮರಗಳ ಜೊತೆಗೆ ಒಡಲ ತುಂಬ ಹೂವು ತುಂಬಿಕೊಂಡು ಬಳುಕುತ್ತ ನಿಂತ ವೈಯ್ಯಾರಿ ಸೇವಂತಿಗೆ ಗಿಡಗಳು. ಒಮ್ಮೆ ಇವನ್ನೆಲ್ಲ ಒಟ್ಟಿಗೆ ಕಂಡರೆ ಏನೋ ಹೆಮ್ಮೆ, ಹೇಳಲಾರದ ಸಂತಸ. ಸುಗ್ಗಿ ಸಮಯದಲ್ಲಿ ಮನೆ ಮಂದಿ ಎಲ್ಲ ಹೊಲದಲ್ಲಿ ಮಲಗುವುದು ವಾಡಿಕೆ. ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಹೊಲದಿಂದ ಮನೆಗೆ ಅದೂ ತಾತನ ಜೊತೆ ಹೋಗಬೇಕಾದರೆ ಆ ಮೈಕೊರೆವ ಛಳಿ, ಒಂದೆ ಸಮನೆ ಬಿಸೋ ಸುಳಿರ್ಗಾಳಿಯಲಿ ದಂಡಿ ಯಾತ್ರೆಯ ಕಥೆ( ಎಷ್ಟಾದರೂ ಗಾಂಧೀಜಿಯ ಪರಮ ಭಕ್ತ )  ಹೇಳ್ತಾ ಹೋಗುತ್ತಿದ್ದರು(ಓಡುತ್ತಿದ್ದರು. ಅವರ ನಡಿಗೆ ನನ್ನ ಓಟ) ನನಗೊ ಮನಸ್ಸು ಪೂರ ದಾರಿಯಲ್ಲಿ ಸಿಗುವ ಎಲಚೆ ಮರದಲ್ಲಿ ಸಿಗುವ ಎಲಚೆ ಹಣ್ಣುಗಳ ಹೆಕ್ಕುವ ಚಿಂತೆ. ಮನವನರಿಯವರಂತೆ ಮರ ಬರುತ್ತಿದ್ದಂತೆ ಹಣ್ಣಗಳು ತುಂಬಿದ್ದ ಕೊಂಬೆಯ ಕೆಳಗೆ ಪಂಚೆ ಹಾಸಿ ನಿರ್ಧಾರಕ್ಕೆ ಮರವ ಹತ್ತಿ ಕೊಂಬೆಯನೊಮ್ಮೆ ಅಲುಗಿಸಿದರೆ ಆ ದಿನದ ಬಹು ಮುಖ್ಯವಾದ ಕೆಲಸ ಮುಗಿಸಿದ ಹೆಮ್ಮೆ ಅವರಿಗೆ. ಗೆಳತಿಯರೊಡನೆ ಹಂಚಿ ತಿನ್ನುವ ಸಂಭ್ರಮ ನನಗೆ.  ತತ್..... ...

ಅವನು

Image
ರಾತ್ರಿ ಪೂರ ನನ್ನ ರೂಮ್ ಕ್ಲೀನ್ ಮಾಡುವ ಹಠಕ್ಕೆ ಬಿದ್ದವಳಂತೆ ಎಲ್ಲವನ್ನೂ ಹರಡಿಕೊಂಡಿದ್ದೆ. ಬೆಡ್ ಮೇಲಿದ್ದ ನಾಲ್ಕು ಪುಸ್ತಕಗಳನ್ನು ಅವುಗಳ ಸ್ವಸ್ಥಾನದಲ್ಲಿರಿಸಿದರೆ ಕೆಲಸ ಮುಗಿಯುತ್ತಿತ್ತು. ಹಾಗೆ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. "ಬಳ್ಳಿಕಾಳಬೆಳ್ಳಿ" ಇತ್ತೀಚೆಗೆ ಓದಿ ಮುಗಿಸಿದ್ದೆನಾದರೂ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. "ಉರಿಯ ನಾಲಗೆ" ನಂದಿನಿ ಈ ಪುಸ್ತಕ ಓದು ಅಂತ ಕೊಟ್ಟ ಎರಡು ವರ್ಷಗಳೆ ಕಳೆದಿವೆ ಆದರೂ ಓದುವ ಘಳಿಗೆ ಕೂಡಿ ಬಂದಿರಲಿಲ್ಲ. "ಮಿಸಳ್ ಭಾಜಿ" ಈ ಪುಸ್ತಕ ಒಂಥರಾ ನನ್ನ ಸಂಗಾತಿ ದಿನವೂ ಪಕ್ಕದಲ್ಲಿರಲೆಬೇಕು. ನಾಲ್ಕನೆಯ ಪುಸ್ತಕದ "ಈ ಗುಲಾಬಿಯು ನಿನಗಾಗಿ........." ಪುಸ್ತಕ ಹೆಸರು ನೋಡಿತ್ತಿದ್ದಂತೆ  ಮನದಳಾದಲ್ಲೆಲ್ಲೊ ಹುದುಗಿ ಹೋಗಿದ್ದ ಅವನ ನೆನಪುಗಳು ಧುತ್ತನೆ ಎದ್ದು ನಿಂತವು. ಅರೆ ಕ್ಷಣದಲ್ಲೆ ಮನವನ್ನು ಆವರಿಸಿದ. ನನ್ನನ್ನೆ ಕಾಡುತ್ತಿದ್ದವನ ನೋಡುವ ಮನಸ್ಸಾಗಿ ಫೇಸ್ಬುಕ್ ಓಪನ್ ಮಾಡಿ ಅವನ ವಾಲ್ ನೋಡಿದೆ. ಇಂದು ಬೆಳಗ್ಗೆ ತಾನೆ ಲೈವ್ ಬಂದಿದ್ದಾನೆ, ಅದು ಮಾಂಗಲ್ಯ ಧಾರಣೆಯ ಸಂದರ್ಭದಲ್ಲಿ ಏನೋ ತಿಳಿಯದ ನೋವು. ಮದುಮಗನ ಮುಖ ಸರಿಯಾಗಿ ಕಾಣತ್ತಿಲ್ಲ. ಆತಂಕ ಹೆಚ್ಚಾಯಿತು ಸುಮಾರು ನಾಲ್ಕೈದು ಸಲ ವಿಡಿಯೋ ನೋಡಿದ ಮೇಲೆ ಅವನಲ್ಲ ಎಂದು ಖಾತ್ರಿಯಾಗಿ ಸ್ವಲ್ಪ ನಿರಾಳವಾದೆ. ಹೌದು ಅವನಿಗೆ ಮದುವೆಯಾದರೆ ನಾನೇಕೆ ನೋವು ಅನುಭವಿಸಬೇಕು?? ನನ್ನನ್ನು ನಾನೆ ಕೇಳ...